Skip to main content

Posts

Showing posts from August, 2025

Shri Krishna!

 ಶ್ರೀ ಕೃಷ್ಣ ಪ್ರಭುವು, ಸೇವಕನು ನಾನು! ಲೋಕವನು ಬೆಳಗಿಸುವ, ನಮ್ಮಪ್ಪ ಭಾನು! ವರಗಳನು ನೀಡುವನು, ಕಷ್ಟಗಳ ನೀಗುವನು, ತಂದೆ ನೀನೆಂದೊಡೆ, ಕರುಣೆಯಲಿ ಕರಗುವನು! ಕಾರಣಕೆ ಕಾರಣನು ಲೋಕಕೇ ರಕ್ಷಕನು, ರುಕ್ಮಿಣೀ ವಲ್ಲಭನು, ಕಲಕ್ಕೂ ಭಕ್ಷಕನು!  ಭಾಸ್ಕರನು, ಅರ್ಯಮನು, ದಿವಕರನು ಶಿವನು, ಸ್ಥಿತಿ-ಸೃಷ್ಟಿ-ಲಯ ಕರ್ತ ಎಲ್ಲವೂ ಇವನು!  ಇವ ಮಿತ್ರ, ಇವ ಸತ್ರ, ಸರ್ವತ್ರನಿವನು, ಇವ ಅಸ್ತ್ರ, ಇವ ಶಸ್ತ್ರ, ಇಡಿ ಶಾಸ್ತ್ರನಿವನು!  ಇವ ಒಂದೆ, ಇವ ತಂದೆ, ಲೋಕಕೇ ಹಿತನು, ಇವ ಬಿಂದು, ಇವ ಬಂಧು, ಮಿತನು ಇವ ಅಮಿತನು!  ಪಾಂಡವರ ದ್ರೌಪದಿಯ ಕಷ್ಟದಲಿ ಕಾದವನು ಕುಂತಿಗೆ ಒಲಿದವನು, ಕಂಸನಾ ಕೊಂದವನು! ಕೆಡುಕರಿಗೆ ಕೆಟ್ಟವನು, ಗೀತೆಯನು ಕೋಟ್ಟವನು,  ಬ್ರಹ್ಮಾದಿತಿ ಸುತರ ದರ್ಪವನು ಸುಟ್ಟವನು! ಸಾಕ್ಷಿಯಾ ರೂಪದಲಿ ಎಲ್ಲವನು ಬಲ್ಲವನು, ನಡೆದವಗೆ ನಡೆಯುವನು, ನಿಂತವಗೆ ನಿಲ್ಲುವನು! ಬಿಲ್ಲನೂ ಹಿಡಿಯುವನು, ರಾಕ್ಷಸರ ಕೊಲ್ಲುವನು,  ಎಲ್ಲವನು ಸೆಳೆಯುವನು, ಬೆಳಕಲ್ಲೂ ಹೊಳೆಯುವನು!  ಪಾರ್ಥನಿಗೆ ಸಾರತಿಯು, ಸರ್ವಜ್ಙನಿವನು! ಸ್ತುತಿ ತಂತ್ರ ಮಂತ್ರಗಳ ಪ್ರಣವನೂ ಇವನು!  ಎಲ್ಲರನು ಪೋಷಿಸುವ ಹರಿಯು ಇವ ಹರನು!  ಗತಿ ಯಂತ್ರ, ಕಾಲಗಳ ಸೂತ್ರನಿವ ಯಮನು! ಕೇಶವನು, ಮಾಧವನು, ಶ್ರೀಧರನು, ಭವನು! ನರನು ಇವ, ಸ್ಮರನು ಇವ, ಇವನು ವಾಮನನು!  ನರಹರಿಯು, ಕೇಸರನು, ಜಾರಕನು, ಅಜರನು!  ಇವ ಶಕ್ತಿ, ಇವ ಭಕ್...

Meaning of Krishna Ashtakam

Krishna Ashtakam vasudēva-sutaṃ dēvaṃ kaṃsa-chāṇūra-mardanam । dēvakī-paramānandaṃ kṛṣṇaṃ vandē jagadgurum ॥ -- vasudEva-sutam (son of vasudeva), dEvam (the Lord; self-effulgant), kamsa-chAnUra-mardanam (the killer of kamsa and chAnUra), dEvakI-paramAnandam (one who gives the greatest delight to dEvaki, His mother), Krshnam vande jagadgurum (I bow down to Sri Krishna, the universal teacher)  -- I bow down to Lord Sri Krishna, the Jagadguru (the universal teacher), who is the son of vAsudEva, the killer of kamsa and chAnUra, and one who gives the greatest pleasure to dEvaki (His mother).  - Krishna says in Gita that He comes down to protect His devotees and to destroy the miscreants. He gives pleasure to those who shower love to Him. "vasu"s imply the elements and He is the Lord of all elements, all elements emanate from Him alone. kamsa and chAnura represent the demonic forces, and dEvakI (prayed to have the Lord as her child) the motherly affection of a devotee. He gives ple...

ಕನ್ನಡ ಭಾಷೆಯ ಸೌಂದರ್ಯ

ನಮ್ಮ   ಕನ್ನಡ ಭಾಷೆಯ ಸೊಗಸು, ಆಳ, ಅರ್ಥಭರಿತ ಪದಗಳು ಮತ್ತು ಕವಿತ್ವದ ಸೌಂದರ್ಯದ ಬಗ್ಗೆ ಏನೂ ಹೇಳ್ಬೇಕಿಲ್ಲ. ನಮ್ಗೆಲ್ಲಾ ಗೊತ್ತಿರೋದೆ . ಹಳೇ ಯ  ಕಾವ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ, ಕನ್ನಡವು ಭಾವನೆಗಳ ಅನಂತ ಸಾಗರವನ್ನು ವ್ಯಕ್ತಪಡಿಸುವ ಶಕ್ತಿ ಹೊಂದಿದೆ. ಇದರ ಲಾಲಿತ್ಯಮಯ ಧ್ವನಿ, ಸಮೃದ್ಧ ಶಬ್ದಸಂಪತ್ತು ಮತ್ತು ವೈವಿಧ್ಯಮಯ ಉಪಭಾಷೆಗಳು ಹೃದಯವನ್ನ ಸ್ಪರ್ಶಿಸುತ್ತವೆ.  ಮಾತು, ಹರಟೆ,  ಕಾವ್ಯ, ಕಥೆ, ಗೀತೆ, ನಾಟಕ,  ಹಾಡು, ಸಂಗೀತ -  ಯಾವ ರೂಪದಲ್ಲಾದರೂ ಕನ್ನಡವು ತನ್ನ ವೈಶಿಷ್ಟ್ಯಪೂರ್ಣ ಚಿತ್ತಾರವನ್ನು ಬಿಚ್ಚಿಡುತ್ತದೆ. ಇದು ಕೇವಲ ಒಂದು ಭಾಷೆಯಲ್ಲ, ಸಾವಿರಾರು ವರ್ಷಗಳ ಸಂಸ್ಕೃತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳ ಜೀವಂತ ಸಾಕ್ಷಿಯಾಗಿದೆ. ನಮ್ಮ  ನಿತ್ಯ ವ್ಯವಹಾರದಲ್ಲಿ  ನಾವು ಸುಮಾರ್ ಸಾರಿ ಪದಗಳ ಪುನರ್ಪ್ರಯೋಗದಿಂದ ಒಂದು ವಿಷಯದ ಕಡೆ ಗಮನ ಸೆಳೆಯುವ ಪ್ರಯತ್ನ ಮಾಡ್ತೀವಿ. ಉದಾಹರಣೆಗೆ “ಸುಮ್ಸುಮ್ನೆ”, “ನಗ್-ನಗ್ತಾ”, “ಕೂತ್-ಕೂತು” ಇತ್ಯಾದಿ. ನನ್ನ ತಲೆಗೆ ಬಂದ ಇತರ ಪ್ರಯೋಗಗಳು:  ಎಲ್ಲೆಲ್ಲೋ ಹೆಂಗ್ಹೆಂಗೋ ಅಷ್ಟಷ್ಟೆ ಅಲ್ಲಲ್ಲಿ ಬಿದ್-ಬಿದ್ದು ಚಿಕ್-ಚಿಕ್ಕ ದೊಡ್ದೊಡ್ಡ ಯಾವ್ಯಾವ್ದೋ ಹತ್-ಹತ್ರ ಹೆಚ್-ಹೆಚ್ಚು ಹುಚ್-ಹುಚ್ಚು ಕಚ್ಚಿ-ಕಚ್ಚಿ ಬಿಚ್ಚಿ-ಬಿಚ್ಚಿ ಚುಚ್ಚಿ-ಚುಚ್ಚಿ ಕೊಚ್ಚಿ-ಕೊಚ್ಚಿ ಸರಸರನೆ ಜಾಸ್-ಜಾಸ್ತಿ ಸ್ವಲ್-ಸ್ವಲ್ಪ ಕಮ್-ಕಮ್...

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮ

ಈ ಅದ್ಭುತವಾದ ಹಾಡು ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದ ಮನರಂಜಿಸುವ ಜೊತೆಗೆ ಅರ್ಥವಾಗಿದೆಯೋ ಇಲ್ಲವೋ ಅನ್ನುವ ಸ್ಥಿತಿಯಲ್ಲಿ ಬಿಟ್ಟಿದೆ. ಕೆಲವು ಪದಗಳಂತೂ ನನಗೆ ನಿಜವಾಗ್ಲೂ ಕನ್ನಡ ಬರುತ್ತದೆಯೇ ಎನ್ನುವ ಹಾಗೆ ಮಾಡಿವೆ. ಅದಕ್ಕಾಗಿಯೇ ನಾನು ನನ್ನ ಲಾಭಕ್ಕಾಗಿ ಇದನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ. ನನ್ನ ಶಕ್ತಿಮಟ್ಟಿಗೆ ಸಾಧ್ಯವಾದಷ್ಟು ಅನುವಾದಿಸಲು ಪ್ರಯತ್ನಿಸಿದ್ದೇನೆ. ದಯವಿಟ್ಟು ತಪ್ಪಿದ್ದಲ್ಲಿ ಕ್ಷಮಿಸಿ, ಸರಿಯಾದದ್ದನ್ನು ತಿಳಿಸಿ. ಕ ನ ಕದಾಸರವರ ಸುಂದರವಾದ ಪ್ರಶ್ನೋತ್ತರ ಸಂಕಲನ : )  ಒಂದು ವಿಚಿತ್ರವಾದ ಗಣೇಶ  ವಂದನೆ :-)  ಎಷ್ಟೊ ದಿನ ಇದು ಶಾರದೆಯನ್ನು ಕುರಿತು ಬರೆದ ಹಾಡು ಎಂದು ತಿಳಿದಿದ್ದೆ :-) ಶಾರದೆ ಎಂದರೆ ಒಂದು ಅರ್ಥದಲ್ಲಿ ಭಾದ್ರಪದ ಮಾಸದ ಸಂಕೇತ ಎಂದೂ ಇದೆ ಎಂದು ಎಲ್ಲೋ ಕೇಳಿದ್ದು ನೆನಪು. ಶಾರದೆ ವಿದ್ಯಾ ದೇವತೆ. ಗಣೇಶ ವಿದ್ಯೆಯ ಪುತ್ರ.  ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮ -- ಓ ತಾಯಿ ಶಾರದೆಯೇ, ಉಮಾ ಮಹೇಶ್ವರಿಯೇ, ನಿಮ್ಮೊಳಗೆ (ನಿಮ್ಮ ಅಂತರಂಗದಲ್ಲಿ, ಮನಸಿನಲ್ಲಿ, ಹೃದಯದಲ್ಲಿ) ನೆಲೆಸಿರುವ ಇವನು ಯಾರಮ್ಮ?  ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೇ ಕಾಣಮ್ಮ ಕಮ್ಮಗೋಲನ (ಕಾಮದೇವರ) ವೈರಿಯ (ಶಿವ ನ ; ಕಾಮನನ್ನು ಸುಟ್ಟವನ) ಮಗನಾದ ಈ ಸೊಂಡಿಲನ್ನು ಹೆಮ್ಮೆಯಿಂದ ಆಡಿಸುತ್ತಿರುವ (ನಿನ್ನೊಳಗೇಿ ಇರುವ)  ಈ  ...

ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ

   ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ ದೇವ್ಯುವಾಚ ದೇವದೇವ! ಮಹಾದೇವ! ತ್ರಿಕಾಲಜ್ಞ! ಮಹೇಶ್ವರ! ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ॥ ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ಛಾಮಿ ತತ್ತ್ವತಃ ॥ ಈಶ್ವರ ಉವಾಚ ದೇವಿ! ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಮ್ । ಸರ್ವೈಶ್ವರ್ಯಕರಂ ಪುಣ್ಯಂ ಸರ್ವಪಾಪ ಪ್ರಣಾಶನಮ್ ॥ ಸರ್ವದಾರಿದ್ರ್ಯ ಶಮನಂ ಶ್ರವಣಾದ್ಭುಕ್ತಿ ಮುಕ್ತಿದಮ್ । ರಾಜವಶ್ಯಕರಂ ದಿವ್ಯಂ ಗುಹ್ಯಾದ್-ಗುಹ್ಯತರಂ ಪರಮ್ ॥ ದುರ್ಲಭಂ ಸರ್ವದೇವಾನಾಂ ಚತುಷ್ಷಷ್ಟಿ ಕಳಾಸ್ಪದಮ್ । ಪದ್ಮಾದೀನಾಂ ವರಾಂತಾನಾಂ ನಿಧೀನಾಂ ನಿತ್ಯದಾಯಕಮ್ ॥ ಸಮಸ್ತ ದೇವ ಸಂಸೇವ್ಯಂ ಅಣಿಮಾದ್ಯಷ್ಟ ಸಿದ್ಧಿದಮ್ । ಕಿಮತ್ರ ಬಹುನೋಕ್ತೇನ ದೇವೀ ಪ್ರತ್ಯಕ್ಷದಾಯಕಮ್ ॥ ತವ ಪ್ರೀತ್ಯಾದ್ಯ ವಕ್ಷ್ಯಾಮಿ ಸಮಾಹಿತಮನಾಶ್ಶೃಣು । ಅಷ್ಟೋತ್ತರ ಶತಸ್ಯಾಸ್ಯ ಮಹಾಲಕ್ಷ್ಮಿಸ್ತು ದೇವತಾ ॥ ಕ್ಲೀಂ ಬೀಜ ಪದಮಿತ್ಯುಕ್ತಂ ಶಕ್ತಿಸ್ತು ಭುವನೇಶ್ವರೀ । ಅಂಗನ್ಯಾಸಃ ಕರನ್ಯಾಸಃ ಸ ಇತ್ಯಾದಿ ಪ್ರಕೀರ್ತಿತಃ ॥ ಧ್ಯಾನಂ ವಂದೇ ಪದ್ಮಕರಾಂ ಪ್ರಸನ್ನವದನಾಂ ಸೌಭಾಗ್ಯದಾಂ ಭಾಗ್ಯದಾಂ ಹಸ್ತಾಭ್ಯಾಮಭಯಪ್ರದಾಂ ಮಣಿಗಣೈಃ ನಾನಾವಿಧೈಃ ಭೂಷಿತಾಮ್ । ಭಕ್ತಾಭೀಷ್ಟ ಫಲಪ್ರದಾಂ ಹರಿಹರ ಬ್ರಹ್ಮಾಧಿಭಿಸ್ಸೇವಿತಾಂ ಪಾರ್ಶ್ವೇ ಪಂಕಜ ಶಂಖಪದ್ಮ ನಿಧಿಭಿಃ ಯುಕ್ತಾಂ ಸದಾ ಶಕ್ತಿಭಿಃ ॥ ಸರಸಿಜ ನಯನೇ ಸರೋಜಹಸ್ತೇ ಧವಳ ತರಾಂಶುಕ ಗಂಧಮಾಲ್ಯ ಶೋಭೇ । ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನ ಭೂತಿಕರಿ...